ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ಇಸ್ಪೀಟ್ ಅಡ್ಡೆ ಮೇಲೆ‌ ಪೊಲೀಸರ ದಾಳಿ: 7 ಜನ ವಶಕ್ಕೆ

Pakka News Web • 8 ಆಗಸ್ಟ್ 2026,

ಮುಂಡಗೋಡ: ತಾಲೂಕಿನ ಮರಗಡಿ ಗ್ರಾಮದಿಂದ ಓಣಿಕೇರಿ ಗ್ರಾಮಕ್ಕೆ ತೆರಳುವ ರಸ್ತೆ ಬದಿಯಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಇಸ್ಪೀಟ್ ಜೂಜಾಟದ (ಅಂದರ್ ಬಾಹರ್) ಅಡ್ಡಡೆಯ ಮೇಲೆ ಮುಂಡಗೋಡ ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ.

ಆಗಸ್ಟ್ 7ರಂದು ಜೂಜುಕೋರರು ಹಣವನ್ನು ಪಂಥವಾಗಿಟ್ಟುಕೊಂಡು ಇಸ್ಪೀಟ್ ಆಟದಲ್ಲಿ ತೊಡಗಿದ್ದಾಗ ಪೊಲೀಸ್ ನಿರೀಕ್ಷಕ ರಮೇಶ್ ಹನಾಪುರ ಅವರ ನೇತೃತ್ವದ ತಂಡ ಸಕಾಲದಲ್ಲಿ ದಾಳಿ ನಡೆಸಿದೆ. 

ಈ ಕಾರ್ಯಾಚರಣೆಯಲ್ಲಿ ಓಣಿಕೇರಿ ನಿವಾಸಿಗಳಾದ ವಸಂತ ಮರಿಯಪ್ಪ ಚನ್ನಾಪುರ, ರಾಜು ಚನ್ನಪ್ಪ ವಾಸನ್, ಶಿವಾನಂದ ನಾರಾಯಣಪ್ಪ ಅಕ್ಕಸಾಲಿ, ಸಾಧಿಕ ಗೌಸುಸಾಬ ತಿಳವಳ್ಳಿ, ಸುರೇಂದ್ರ ಹುಲಿಯಾರ, ಮಂಜುನಾಥ ಪರಶುರಾಮ ಸುಭಾಂಜಿ ಹಾಗೂ ರಮೇಶ ತಿಪ್ಪಣ್ಣ ಶಿರಮಾಪುರ ಎಂಬ ಏಳು ಜನರನ್ನು ಕೈದಿಯಾಗಿ ಬಂಧಿಸಲಾಗಿದೆ.

ಬಂಧಿತರಿಂದ ಒಟ್ಟು 5,100 ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ್ ಎಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಅಕ್ರಮ ಚಟುವಟಿಕೆಗೆ ಸಂಬಂಧಿಸಿದಂತೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 161/2026 ಹಾಗೂ 87 ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250